ಸೊಸೆಗೊಂದು ಕಾಲ

ಸೈರಿಸು ಮಗಳೇ
ಹೈರಾಣವಾಗದಿರು
ಶತ ಶತಮಾನಗಳಿಂದ ಬಂದ
ಗತ್ತು ಗಮ್ಮತ್ತು ಶಾಶ್ವತವಲ್ಲ.
ಹೊಸದಂತೂ ಅಲ್ಲ.
ಅಟ್ಟವೇರಿದವರು ಇಳಿಯಲೇ ಬೇಕಲ್ಲ
ನಿನ್ನವ್ವ ನನ್ನವ್ವ ಅವರವ್ವ.
ತುಳಿದದ್ದು ಒಂದೇ ಹಾದಿ
ಕಲ್ಲು ಮುಳ್ಳಿನ ಗಾದಿ
ನಾಲ್ಕು ಗೋಡೆಗಳಲ್ಲೇ ಚಿತ್ತಾರ
ಹೊಸಲಿನಿಂದಾಚೆ ಹೊಸ
ಜಗತ್ತು ಕಂಡರಿಯದೆ
ದನಿಯೆತ್ತದ ದರ್ಪದ
ದಳ್ಳುರಿಗೆ ದಹಿಸಿ ದಹಿಸಿ
ಗುಡುಗಾಗದೆ ಮಿಂಚಾಗದೆ
ತಣ್ಣನೆಯ ಮೋಡವಾಗಿ
ಮಡುಗಟ್ಟೆ ಮಳಮಳಿಸಿ
ಒಳಗೊಳಗೆ ಕುದ್ದು
ಕಾವಿಗೆ ಕರಗಿದವರು
ಕತ್ತಲೆಯ ಕಾಮಕ್ಕೆ
ಬೆತ್ತಲಾಗಿ ಬಸಿರಾಗಿ
ಕಟ್ಟುನಿಟ್ಟಿನ ಮನುಶಾಸನ
ತಪ್ಪದೆ ಪಾಲಿಸಿ ಚರಿತ್ರೆ
ಇತಿಹಾಸದ ಗರ್ಭ ಸೇರದೆ
ಕಥೆ ಕಾದಂಬರಿಗೆ
ವಸ್ತುವಾದವರು
ಸೈರಿಸು ಮಗಳೇ
ಕಾಲ ಯಾರಪ್ಪನದೂ ಅಲ್ಲ.
ನನ್ನ ನಿನ್ನ ಯಾರ ಮಾತು ಕೇಳುವುದಿಲ್ಲ
ಸಹನೆಯ ದೀಪ ಹಿಡಿದು ಕಾಯುತ್ತಿರು
ಬಂದೇ ಬರುತ್ತದೆ
ಅತ್ತೆಗೊಂದು ಕಾಲವಾದರೆ
ಸೊಸೆಗೊಂದು ಕಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಅಸಹಾಯಕ
Next post ನಿನ್ನ ನೆನಪು ಕಂಪು ತಂಪು

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys